1) ಇತ್ತೀಚೆಗೆ ದೇಶಾದ್ಯಂತ ಎದುರಾಗಿರುವ ಎಲ್ ಪಿ ಜಿ (LPG) ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ?
ಉತ್ತರ: ಅಗತ್ಯ ವಸ್ತುಗಳ ಕಾಯ್ದೆ 1955 (Essential Commodities Act 1955) ಅಡಿ ಪೂರೈಕೆ ಮೇಲೆ ನಿಗಾ.
ವಿವರಣೆ: ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಮಾರುಕಟ್ಟೆಯಲ್ಲಿ ವ್ಯತ್ಯಯವಾಗಿದ್ದು, ಹೋಟೆಲ್ ಮತ್ತು ಮನೆ ಬಳಕೆಯ ಸಿಲಿಂಡರ್ಗಳ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರವು ಭೀತಿ ಬೇಡ ಎಂದು ಭರವಸೆ ನೀಡಿದೆ.
2) 'ಆಹಾರ್ 2026' (AAHAR 2026) ಅಂತರಾಷ್ಟ್ರೀಯ ಮೇಳ ಎಲ್ಲಿ ಉದ್ಘಾಟನೆಗೊಂಡಿತು?
ಉತ್ತರ: ನವದೆಹಲಿ.
ವಿವರಣೆ: ಇದು ಆಹಾರ ಮತ್ತು ಅತಿಥಿ ಸತ್ಕಾರ ಕ್ಷೇತ್ರದ 40ನೇ ಆವೃತ್ತಿಯ ಮೇಳವಾಗಿದ್ದು, ಭಾರತೀಯ ಕೃಷಿ ರಫ್ತು ಉತ್ತೇಜಿಸಲು ಹಮ್ಮಿಕೊಳ್ಳಲಾಗಿದೆ. ಇದು ಮಾರ್ಚ್ 10 ರಿಂದ 14 ರವರೆಗೆ ನಡೆಯುತ್ತದೆ.
3) ಮೆಕ್ಸಿಕೋದ ಕರಾವಳಿಯಲ್ಲಿ ಇತ್ತೀಚೆಗೆ ಪತ್ತೆಯಾದ ಅಪರೂಪದ ಸಮುದ್ರ ಜೀವಿ ಯಾವುದು?
ಉತ್ತರ: ಓರ್ ಫಿಶ್ (Oarfish).
ವಿವರಣೆ: ಭೂಕಂಪದ ಮುನ್ಸೂಚನೆ ನೀಡುವ ಮೀನು ಎಂದು ನಂಬಲಾದ ಈ ಮೀನು ಸಮುದ್ರ ತೀರಕ್ಕೆ ಬಂದಿರುವುದು ವಿಜ್ಞಾನಿಗಳಲ್ಲಿ ಕುತೂಹಲ ಮೂಡಿಸಿದೆ.
4) ನ್ಯಾಟೋ (NATO) ತನ್ನ ‘Cold Response 2026’ ಮಿಲಿಟರಿ ವ್ಯಾಯಾಮವನ್ನು ಎಲ್ಲಿ ಆರಂಭಿಸಿದೆ?
ಉತ್ತರ: ಆರ್ಕ್ಟಿಕ್ (Arctic) ಪ್ರದೇಶ.
ವಿವರಣೆ: ಈ ವ್ಯಾಯಾಮವನ್ನು ನಾರ್ವೆ ದೇಶದ ಉತ್ತರ ಭಾಗದಲ್ಲಿ, ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಗಡಿಯ ಬಳಿ ತನ್ನ ರಕ್ಷಣಾ ಸಿದ್ಧತೆಯನ್ನು ಪ್ರದರ್ಶಿಸಲು ಆರಂಭಿಸಿದೆ.
5) ಲಡಾಖ್ನ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಯಾರನ್ನು ನೇಮಕ ಮಾಡಲಾಗಿದೆ?
ಉತ್ತರ: ವಿನಯ್ ಕುಮಾರ್ ಸಕ್ಸೇನಾ (ಇವರು ಮೊದಲು ದೆಹಲಿ ಗವರ್ನರ್ ಆಗಿದ್ದರು).
ವಿವರಣೆ: ಲಡಾಖ್ನಲ್ಲಿ ಆರನೇ ಅನುಸೂಚಿ, ರಾಜ್ಯ ಹುದ್ದೆ ಮತ್ತು ಸ್ಥಳೀಯರಿಗೆ ಉದ್ಯೋಗ ರಕ್ಷಣೆಗಳ ಬೇಡಿಕೆಗಳಿಗಾಗಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಆಡಳಿತಾತ್ಮಕ ಬದಲಾವಣೆಗಳು ನಡೆದವು.
6) ಕರ್ನಾಟಕ ಬಜೆಟ್ 2026 ರಲ್ಲಿ ‘ಅನ್ನಭಾಗ್ಯ’ ಯೋಜನೆಯಲ್ಲಿ ತಂದಿರುವ ಬದಲಾವಣೆ ಏನು?
ಉತ್ತರ: ‘ಇಂದಿರಾ ಆಹಾರ ಕಿಟ್’ ವಿತರಣೆ.
ವಿವರಣೆ: ಅಕ್ಕಿಯ ಜೊತೆಗೆ ಬೇಳೆ, ಎಣ್ಣೆ ಮತ್ತು ಉಪ್ಪನ್ನು ಒಳಗೊಂಡ ಕಿಟ್ ನೀಡಲು ಸರ್ಕಾರ ನಿರ್ಧರಿಸಿದೆ.
7) ಇತ್ತೀಚೆಗೆ ಸುದ್ದಿಯಲ್ಲಿದ್ದ ‘ನಮೋ ಲಕ್ಷ್ಮಿ’ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಉತ್ತರ: ಗುಜರಾತ್
ವಿವರಣೆ: 9 ರಿಂದ 12ನೇ ತರಗತಿಯ ವಿದ್ಯಾರ್ಥಿನಿಯರಿಗೆ 50,000 ರೂ ಗಳ ಆರ್ಥಿಕ ನೆರವು ನೀಡುವ ಯೋಜನೆ.
ರಾಜ್ಯ ಸುದ್ದಿಗಳು (State)
- ಶರಾವತಿ ಅಭಯಾರಣ್ಯ: ಶರಾವತಿ ಕಣಿವೆ ಸಿಂಹ ಬಾಲದ ಮಕಾಕ್ ಅಭಯಾರಣ್ಯದಲ್ಲಿ ಎಲ್ಲಾ ಭೂಮಟ್ಟದ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
- ಎಲ್ಪಿಜಿ ಬಿಕ್ಕಟ್ಟು: ಬೆಂಗಳೂರಿನಲ್ಲಿ ಅಡುಗೆ ಅನಿಲ ಕೊರತೆಯಿಂದಾಗಿ ಹೋಟೆಲ್ಗಳು ಇಂಡಕ್ಷನ್ ಮತ್ತು ಸೌದೆ ಒಲೆಗಳ ಬಳಕೆಗೆ ಮುಂದಾಗಿವೆ.
- ಸೋಶಿಯಲ್ ಮೀಡಿಯಾ ಬ್ಯಾನ್: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಮಸೂದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.
- ಹವಾಮಾನ ವರದಿ: ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 32°C ದಾಖಲಾಗಲಿದ್ದು, ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
- ರೈತರ ಪ್ರತಿಭಟನೆ: ಬೆಲೆ ಕುಸಿತದ ಹಿನ್ನೆಲೆಯಲ್ಲಿ ತಂಬಾಕು ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳು (National):
- ಲೋಕಸಭೆ: ಸ್ಪೀಕರ್ ಓಂ ಬಿರ್ಲಾ ಅವರ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಧ್ವನಿಮತದಿಂದ ಸೋಲಿಸಲ್ಪಟ್ಟಿದೆ.
- ರಕ್ಷಣಾ ಇಲಾಖೆ: ಡಿಆರ್ಡಿಒ (DRDO) ಮತ್ತು ನೌಕಾಪಡೆಯು ಸ್ವದೇಶಿ ನಿರ್ಮಿತ ADC-150 ಏರ್ ಡ್ರಾಪ್ಪಬಲ್ ಕಂಟೈನರ್ನ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
- ನಮೋ ಲಕ್ಷ್ಮಿ ಯೋಜನೆ: ಗುಜರಾತ್ ಸರ್ಕಾರವು 9 ರಿಂದ 12ನೇ ತರಗತಿ ವಿದ್ಯಾರ್ಥಿನಿಯರಿಗಾಗಿ ಆರ್ಥಿಕ ನೆರವು ನೀಡುವ ಯೋಜನೆಗೆ ಚಾಲನೆ ನೀಡಿದೆ.
- ಮಹಿಳಾ ಕೃಷಿ ಸಮಾವೇಶ: ನವದೆಹಲಿಯಲ್ಲಿ ಇಂದಿನಿಂದ (ಮಾರ್ಚ್ 12) 'ಜಾಗತಿಕ ಮಹಿಳಾ ಕೃಷಿ-ಆಹಾರ ವ್ಯವಸ್ಥೆಗಳ ಸಮ್ಮೇಳನ' (GCWAS-2026) ಆರಂಭವಾಗಿದೆ.
- ಕಲ್ಕತ್ತಾ ಬ್ರಿಡ್ಜ್: ಐತಿಹಾಸಿಕ 'ಬಾಸ್ಕುಲ್ ಸೇತುವೆ'ಯ ನವೀಕರಣಕ್ಕಾಗಿ ಕೇಂದ್ರ ಸರ್ಕಾರ 117.54 ಕೋಟಿ ರೂ. ಅನುಮೋದಿಸಿದೆ.
- ಅಗತ್ಯ ವಸ್ತುಗಳ ಕಾಯ್ದೆ: ಅಡುಗೆ ಅನಿಲ (LPG) ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು 'ಅಗತ್ಯ ವಸ್ತುಗಳ ಕಾಯ್ದೆ-1955' ಅನ್ನು ಜಾರಿಗೆ ತಂದಿದೆ.
- ರಾಜ್ಯಸಭೆ ಚುನಾವಣೆ: ಶರದ್ ಪವಾರ್ ಸೇರಿದಂತೆ 27 ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ಮತ್ತು ಕ್ರೀಡಾ ಸುದ್ದಿಗಳು (International & Sports):
- ತೈಲ ಬೆಲೆ ಏರಿಕೆ: ಇರಾನ್ನಿಂದ ಹಾರ್ಮುಜ್ ಜಲಸಂಧಿ ಬಂದ್ ಆಗುವ ಭೀತಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.
- ಏರ್ ಇಂಡಿಯಾ ಅಪಘಾತ: ಫುಕೆಟ್ನಲ್ಲಿ ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನದ ಚಕ್ರಗಳು ಕಳಚಿಬಿದ್ದಿದ್ದು, ದೊಡ್ಡ ದುರಂತವೊಂದು ತಪ್ಪಿದೆ.
- ಐಪಿಎಲ್ 2026: ಗುಜರಾತ್ ಟೈಟನ್ಸ್ ತಂಡಕ್ಕೆ ಮಾಜಿ ವಿಕೆಟ್ ಕೀಪರ್ ವಿಜಯ್ ದಹಿಯಾ ಅವರನ್ನು ಸಹಾಯಕ ತರಬೇತುದಾರರನ್ನಾಗಿ ನೇಮಕ ಮಾಡಲಾಗಿದೆ.
- ಸ್ಮೃತಿ ಮಂಧಾನ: ಐಸಿಸಿ (ICC) ಮಹಿಳಾ ಏಕದಿನ ಶ್ರೇಯಾಂಕದಲ್ಲಿ ಸ್ಮೃತಿ ಮಂಧಾನ ತಮ್ಮ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ..
- ಟಿ20 ವಿಶ್ವಕಪ್: 2026ರ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡಕ್ಕೆ ದೇಶಾದ್ಯಂತ ಭವ್ಯ ಸ್ವಾಗತ ಕೋರಲಾಗುತ್ತಿದೆ.



No comments:
Post a Comment