1). 2026 ರ ವಿಶ್ವ ಸಂತೋಷದ ವರದಿಯಲ್ಲಿ (World Happiness Report) ಭಾರತದ ಸ್ಥಾನ ಎಷ್ಟು?
ಉತ್ತರ: 116 ನೇ ಸ್ಥಾನ
[ವಿವರಣೆ: 2026 ರ ವಿಶ್ವ ಸಂತೋಷದ ವರದಿಯಲ್ಲಿ (World Happiness Report) ಭಾರತವು ಒಟ್ಟು 147 ದೇಶಗಳ ಪಟ್ಟಿಯಲ್ಲಿ 116 ನೇ ಸ್ಥಾನವನ್ನು ಪಡೆದುಕೊಂಡಿದೆ.
2025 ರ ವರದಿಯಲ್ಲಿ ಭಾರತವು 118 ನೇ ಸ್ಥಾನದಲ್ಲಿತ್ತು. ಈಗ ಎರಡು ಹಂತಗಳ ಏರಿಕೆ ಕಂಡುಬಂದಿದೆ. ಫಿನ್ಲೆಂಡ್ ಸತತ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ಸಂತೋಷದಾಯಕ ದೇಶವಾಗಿ ಹೊರಹೊಮ್ಮಿದೆ.]
---------------------------------------------------------------------------------------------------------------------------
2). ವಿಶ್ವದ ಮೊದಲ 'ಆಟೋನಮಸ್ ಮ್ಯಾರಿಟೈಮ್ ಶಿಪ್ಬಿಲ್ಡಿಂಗ್ ಸೆಂಟರ್' ಎಲ್ಲಿ ಸ್ಥಾಪನೆಯಾಗಲಿದೆ?
ಉತ್ತರ: ಆಂಧ್ರಪ್ರದೇಶ (AP).
ವಿವರಣೆ: ಹಡಗು ನಿರ್ಮಾಣ ಕ್ಷೇತ್ರದಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಸಲು ಈ ಕೇಂದ್ರ ಸಹಕಾರಿಯಾಗಲಿದೆ.
----------------------------------------------------------------------------------------------------
3). ಇತ್ತೀಚೆಗೆ ಭೀಮ್ (BHIM) ಆಪ್ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ಯಾರು ಆಯ್ಕೆಯಾಗಿದ್ದಾರೆ?
ಉತ್ತರ: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni).
[ವಿವರಣೆ: ಭಾರತದ ಡಿಜಿಟಲ್ ಪಾವತಿ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಲು ಮತ್ತು ಜನರಲ್ಲಿ ವಿಶ್ವಾಸ ಮೂಡಿಸಲು 'ಎನ್ಪಿಸಿಐ ಭೀಮ್ ಸರ್ವಿಸಸ್ ಲಿಮಿಟೆಡ್', ಕ್ರಿಕೆಟ್ ದಂತಕಥೆ ಎಂ.ಎಸ್. ಧೋನಿ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿದೆ.]
--------------------------------------------------------------------------------------------------------------------------
4). 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕನ್ನಡದ ಸಾಹಿತಿ ಯಾರು?
ಉತ್ತರ: ಅಮರೇಶ ನುಗಡೋಣಿ.
ಅವರ ಕೃತಿ : 'ದಡ ಸೇರಿಸು ತಂದೆ' (ಸಣ್ಣ ಕಥೆಗಳ ಸಂಕಲನ).
[ವಿವರಣೆ : ಭಾರತೀಯ ಸಾಹಿತ್ಯ ಲೋಕದಲ್ಲಿ ಅತ್ಯಂತ ಪ್ರತಿಷ್ಠಿತ ಗೌರವಗಳಲ್ಲಿ ಒಂದಾದ 'ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ'ಯನ್ನು ಪ್ರತಿ ವರ್ಷ ನೀಡಲಾಗುತ್ತದೆ. 2025ನೇ ಸಾಲಿನ ಪ್ರಶಸ್ತಿ ಪಟ್ಟಿಯು ಮಾರ್ಚ್ 2026ರಲ್ಲಿ ಬಿಡುಗಡೆಯಾಗಿದ್ದು, ಅದರಲ್ಲಿ ಕನ್ನಡ ವಿಭಾಗದಿಂದ ಅಮರೇಶ ನುಗಡೋಣಿ ಅವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ.]
-------------------------------------------------------------------------------------------------------------------------
5). KPSC ಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರ ತಡೆಗಟ್ಟಲು ಸರ್ಕಾರವು ಕೈಗೊಂಡಿರುವ ಪ್ರಮುಖ ನಿರ್ಧಾರವೇನು?
ಉತ್ತರ: KPSC ಯಲ್ಲಿ ಸುಧಾರಣೆ ತರಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರವು 'ಸದನ ಸಮಿತಿ' ರಚಿಸುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದೆ.
[ವಿವರಣೆ : ಸರ್ಕಾರವು ಘೋಷಿಸಿರುವ 'ಪಂಚ ಕ್ರಮ'ಗಳು (ಐದು ಸುಧಾರಣೆಗಳು) :
1. ಪ್ರತಿ ವರ್ಷ ನಿರ್ದಿಷ್ಟ ದಿನಾಂಕದಂದೇ ಪರೀಕ್ಷೆ ನಡೆಸುವುದು.
2. ಬಿಡುಗಡೆಯಾಗುವ ಮುನ್ಸೂಚನೆಯೊಂದಿಗೆ ಖಾಲಿ ಹುದ್ದೆಗಳ ಭರ್ತಿ ಪಟ್ಟಿ ಸಿದ್ಧಪಡಿಸುವುದು.
3. ಗ್ರೂಪ್-ಸಿ (Group-C) ಹುದ್ದೆಗಳಿಗೆ ಸಂದರ್ಶನ ಇರುವುದಿಲ್ಲ.
4. ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ದೇಶನ.
5. ಸದನ ಸಮಿತಿಯಿಂದ ಸಮಗ್ರ ಅಧ್ಯಯನ ನಡೆಸುವುದು.]
----------------------------------------------------------------------------------------------------------------------------
6). ಚೀನಾಕ್ಕೆ ಭಾರತದ ನೂತನ ರಾಯಭಾರಿಯಾಗಿ (Ambassador) ಯಾರು ನೇಮಕಗೊಂಡಿದ್ದಾರೆ?
ಉತ್ತರ: ಅನುಭವಿ ರಾಜತಾಂತ್ರಿಕ ಅಧಿಕಾರಿ ವಿಕ್ರಮ್ ದೊರೈಸ್ವಾಮಿ (Vikram Doraiswami).
[ವಿವರಣೆ : ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿತಾಸಕ್ತಿಗಳನ್ನು ಕಾಯಲು ಮತ್ತು ನೆರೆಹೊರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ರಾಯಭಾರಿಗಳ ಪಾತ್ರ ಬಹಳ ದೊಡ್ಡದು.]
----------------------------------------------------------------------------------------------------------------------------
7). ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ 'ಭವ್ಯ' (BHAVYA) ಯೋಜನೆಯ ಪೂರ್ಣ ರೂಪವೇನು?
ಉತ್ತರ: ಭಾರತ ಔದ್ಯೋಗಿಕ ವಿಕಾಸ ಯೋಜನೆ (Bharat Industrial Development Scheme).
[ವಿವರಣೆ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ (Manufacturing Hub) ಮಾಡಲು ಈ ನಿರ್ಧಾರ ಕೈಗೊಂಡಿದೆ. ಈ ಯೋಜನೆಯು ಭಾರತದ ಆರ್ಥಿಕತೆಯನ್ನು ಬಲಪಡಿಸಲು ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಲು ಪೂರಕವಾಗಿದೆ.]
---------------------------------------------------------------------------------------------------------------------------
8). ಮಾರ್ಚ್ 21 ರಂದು ವಿಶ್ವದಾದ್ಯಂತ ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?
ಉತ್ತರ: ವಿಶ್ವ ಅರಣ್ಯ ದಿನ (World Forestry Day).
[ವಿವರಣೆ: ಅರಣ್ಯಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 21 ರಂದು ಇದನ್ನು ಆಚರಿಸಲಾಗುತ್ತದೆ. 2026ರ ವಿಷಯ (Theme) ಅರಣ್ಯಗಳ ಸುಸ್ಥಿರ ನಿರ್ವಹಣೆಯ ಮೇಲೆ ಕೇಂದ್ರೀಕೃತವಾಗಿದೆ.]
--------------------------------------------------------------------------------------------------------------------------
ರಾಜ್ಯ ವಿದ್ಯಮಾನಗಳು :
- ಬಿಡದಿ ಸ್ಮಾರ್ಟ್ ಸಿಟಿ: ರಾಮನಗರ ಜಿಲ್ಲೆಯ ಬಿಡದಿ ಬಳಿ ಬೃಹತ್ ಟೌನ್ಶಿಪ್ ನಿರ್ಮಾಣಕ್ಕಾಗಿ ಸರ್ಕಾರವು ಸುಮಾರು 7,000 ಎಕರೆ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಿದೆ.
- ರೈಲ್ವೆ ಸಂಪರ್ಕ ವಿಸ್ತರಣೆ: ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಒಟ್ಟು 19 ವಿಶೇಷ ರೈಲುಗಳನ್ನು ಖಾಯಂಗೊಳಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.
- ಚಿತ್ತಾರ ಕಲೆಗೆ ಮನ್ನಣೆ: ಶಿವಮೊಗ್ಗದ ದೀವರು ಜನಾಂಗದ 'ಚಿತ್ತಾರ' ಬಿತ್ತಿ ಚಿತ್ರಕಲೆಯನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಸರ್ಕಾರ ವಿಶೇಷ ಪ್ರೋತ್ಸಾಹ ನೀಡುತ್ತಿದೆ.
---------------------------------------------------------------------------------------------------------------------
ರಾಷ್ಟ್ರೀಯ ವಿದ್ಯಮಾನಗಳು:
- ಸಂತೋಷದ ಸೂಚ್ಯಂಕ: ವಿಶ್ವ ಸಂತೋಷದ ವರದಿ 2026ರಲ್ಲಿ ಭಾರತವು 116ನೇ ಸ್ಥಾನ ಪಡೆದಿದ್ದು, ಕಳೆದ ವರ್ಷಕ್ಕಿಂತ (118) ಸ್ವಲ್ಪ ಸುಧಾರಣೆ ಕಂಡಿದೆ.
- ಖಾಸಗಿ ಪೆಟ್ರೋಲಿಯಂ ಮೀಸಲು: ಭಾರತವು ತನ್ನ ಪೆಟ್ರೋಲಿಯಂ ಭದ್ರತೆಗಾಗಿ ಮೊದಲ ಬಾರಿಗೆ ಖಾಸಗಿ ಕಂಪನಿಗಳ ಸಹಯೋಗದಲ್ಲಿ ಕಾರ್ಯತಂತ್ರದ ತೈಲ ಮೀಸಲು (Strategic Petroleum Reserve) ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ.
- ಪ್ರಾಜೆಕ್ಟ್ ಚೀತಾ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದ ನಂತರ, ನೌರದೇಹಿ ಅಭಯಾರಣ್ಯವನ್ನು ಚೀತಾಗಳ ಮೂರನೇ ಮನೆಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
---------------------------------------------------------------------------------------------------------------------
ಅಂತಾರಾಷ್ಟ್ರೀಯ ಸುದ್ದಿಗಳು:
- ಹಾರ್ಮುಜ್ ಜಲಸಂಧಿ ವಿವಾದ: ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ನಡುವೆ, ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ ಹೊಸದಾಗಿ 'ಟೋಲ್' ವಿಧಿಸಲು ಚಿಂತನೆ ನಡೆಸುತ್ತಿದೆ.
- ಮಧ್ಯಪ್ರಾಚ್ಯದ ಇಂಧನ ಬಿಕ್ಕಟ್ಟು : ಇರಾನ್ ಮತ್ತು ಇಸ್ರೇಲ್+ಅಮೆರಿಕ ನಡುವಿನ ಸಂಘರ್ಷ ತೀವ್ರಗೊಂಡಿದೆ. ವಿಶ್ವದ ಅತಿದೊಡ್ಡ ನೈಸರ್ಗಿಕ ಅನಿಲ ಕ್ಷೇತ್ರವಾದ 'ಸೌತ್ ಪಾರ್ಸ್' (ಇರಾನ್) ಮತ್ತು 'ರಾಸ್ ಲಫ್ಫಾನ್' (ಕತಾರ್) ಮೇಲಿನ ದಾಳಿಗಳು ಭಾರತದ ಇಂಧನ ಭದ್ರತೆಗೆ ಆತಂಕ ತಂದೊಡ್ಡಿವೆ.
- ರಷ್ಯಾದ ತೈಲ ನೌಕೆಗಳ 'ಯೂ-ಟರ್ನ್': ಚೀನಾದತ್ತ ಹೊರಟಿದ್ದ ರಷ್ಯಾದ ಕಚ್ಚಾ ತೈಲ ಹೊತ್ತ ಏಳು ಟ್ಯಾಂಕರ್ಗಳು (ಮುಖ್ಯವಾಗಿ 'ಅಕ್ವಾ ಟೈಟಾನ್') ಹಾದಿ ಮಧ್ಯದಲ್ಲೇ ಗಮ್ಯಸ್ಥಾನ ಬದಲಿಸಿ ಭಾರತದ ಮಂಗಳೂರು ಮತ್ತು ಇತರ ಬಂದರುಗಳತ್ತ ಮುಖ ಮಾಡಿವೆ.(ಅಂತರರಾಷ್ಟ್ರೀಯ ಸುದ್ದಿಪತ್ರಿಕೆಗಳು ವರದಿ ಮಾಡುತ್ತಿವೆ,)
-----------------------------------------------------------------------------------------------------------------------



No comments:
Post a Comment