1) ತಮಿಳುನಾಡಿನ ಮೊದಲ 'ಡಾರ್ಕ್ ಸ್ಕೈ ಪಾರ್ಕ್' (Dark Sky Park) ಎಂದು ಇತ್ತೀಚೆಗೆ ಯಾವ ಮೀಸಲು ಅರಣ್ಯವನ್ನು ಘೋಷಿಸಲಾಗಿದೆ?
ಉತ್ತರ: ಅರಿಯೂರು ಶೋಲಾ ಮೀಸಲು ಅರಣ್ಯ.
[ವಿವರಣೆ: ನಾಮಕ್ಕಲ್ ಜಿಲ್ಲೆಯ ಕೊಲ್ಲಿ ಬೆಟ್ಟಗಳಲ್ಲಿರುವ ಅರಿಯೂರು ಶೋಲಾ ಅರಣ್ಯವನ್ನು ಆಕಾಶ ವೀಕ್ಷಣೆಗಾಗಿ ರಾಜ್ಯದ ಮೊದಲ 'ಡಾರ್ಕ್ ಸ್ಕೈ ಪಾರ್ಕ್' ಎಂದು ಘೋಷಿಸಲಾಗಿದೆ.]
2) ಶ್ರೀನಗರದ ಸೆಂಟ್ರಲ್ ಜೈಲಿನ ಮೊದಲ ಕಾಶ್ಮೀರಿ ಮಹಿಳಾ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡವರು ಯಾರು?
ಉತ್ತರ: ಸಬಾ ಶಾಲ್.
[ವಿವರಣೆ: ಸಬಾ ಶಾಲ್ ಅವರು ಶ್ರೀನಗರದ ಸೆಂಟ್ರಲ್ ಜೈಲಿನ ಆಡಳಿತವನ್ನು ವಹಿಸಿಕೊಂಡ ಮೊದಲ ಸ್ಥಳೀಯ ಮಹಿಳಾ ಅಧಿಕಾರಿಯಾಗಿದ್ದಾರೆ.]
3) 11ನೇ ರೈಸಿನಾ ಡೈಲಾಗ್ (Raisina Dialogue 2026) ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ 'ಅಲೆಕ್ಸಾಂಡರ್ ಸ್ಟಬ್' ಯಾವ ದೇಶದ ಅಧ್ಯಕ್ಷರು?
ಉತ್ತರ: ಫಿನ್ಲೆಂಡ್.
[ವಿವರಣೆ: ಫಿನ್ಲೆಂಡ್ ಅಧ್ಯಕ್ಷರಾದ ಅಲೆಕ್ಸಾಂಡರ್ ಸ್ಟಬ್ ಅವರು ಮಾರ್ಚ್ 4 ರಿಂದ 7 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದಾರೆ ಮತ್ತು ಈ ಡೈಲಾಗ್ನಲ್ಲಿ ಭಾಗವಹಿಸುತ್ತಿದ್ದಾರೆ.]
4) ಇತ್ತೀಚೆಗೆ 'ಯುನಿವರ್ಸಲ್ ಪೋಸ್ಟಲ್ ಯೂನಿಯನ್' (UPU) ಜೊತೆಗೆ ಯಾವ ಭಾರತೀಯ ವ್ಯವಸ್ಥೆಯನ್ನು ಅಂತರರಾಷ್ಟ್ರೀಯ ಹಣ ವರ್ಗಾವಣೆಗಾಗಿ ಸಂಯೋಜಿಸಲಾಗಿದೆ?
ಉತ್ತರ:- UPI (Unified Payments Interface)
[ವಿವರಣೆ:- UPI ಪಾವತಿ ವ್ಯವಸ್ಥೆಯನ್ನು ಜಾಗತಿಕ ಅಂಚೆ ನೆಟ್ವರ್ಕ್ ಮೂಲಕ ಹಣ ವರ್ಗಾವಣೆ ಸೌಲಭ್ಯಗೊಳಿಸಲು UPU ಜೊತೆ ಜೋಡಿಸಲಾಗಿದೆ.]
5) ಯಾವ ದೇಶವು ಇತ್ತೀಚೆಗೆ 'ವಾಟರ್ ಕ್ರಿಮೇಷನ್' (ಆಲ್ಕಲೈನ್ ಹೈಡ್ರೊಲಿಸಿಸ್) ಅನ್ನು ಕಾನೂನುಬದ್ಧಗೊಳಿಸಿದ ಮೊದಲ ಯುರೋಪ್ ರಾಷ್ಟ್ರವಾಯಿತು?
ಉತ್ತರ:- ಸ್ಕಾಟ್ಲೆಂಡ್
[ವಿವರಣೆ:- ಸ್ಕಾಟ್ಲೆಂಡ್ ಪರಿಸರ ಸ್ನೇಹಿ ಅಂತ್ಯಕ್ರಿಯೆ ವಿಧಾನವಾದ ವಾಟರ್ ಕ್ರಿಮೇಷನ್ ಅನ್ನು ಅಧಿಕೃತವಾಗಿ ಅನುಮತಿಸಿದೆ.]
6) ವನ್ಯಜೀವಿ ಸಂಘರ್ಷ ತಡೆಯಲು ಆಂಧ್ರಪ್ರದೇಶ ಸರ್ಕಾರವು ಯಾವ ಯೋಜನೆಯನ್ನು ಪ್ರಾರಂಭಿಸಿದೆ?
ಉತ್ತರ:- ಪ್ರಾಜೆಕ್ಟ್ ಹನುಮಾನ್
[ವಿವರಣೆ:- ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ವನ್ಯಜೀವಿಗಳ ಹಾವಳಿ ತಡೆಯಲು 'ಪ್ರಾಜೆಕ್ಟ್ ಹನುಮಾನ್' ಎಂಬ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. AI ಚಾಲಿತ ಸಿಸಿಟಿವಿ ಮತ್ತು ಡ್ರೋನ್ಗಳ ಮೂಲಕ ಪ್ರಾಣಿಗಳ ಚಲನವಲನಗಳನ್ನು ಮುಂಚಿತವಾಗಿ ಪತ್ತೆಹಚ್ಚಿ ಮಾನವನ ವಸತಿ ಪ್ರದೇಶಗಳಿಗೆ ಬರದಂತೆ ತಡೆಯುವುದು ಈ ಯೋಜನೆಯ ಗುರಿ.]
7) ಒಡಿಶಾದ ದೇಬ್ರಿಗಢ ವನ್ಯಜೀವಿ ಅಭಯಾರಣ್ಯದಲ್ಲಿ ಇತ್ತೀಚೆಗೆ ಯಾವ ಪ್ರಾಣಿಯ ರಕ್ಷಣೆಗಾಗಿ 'ಇಂಡಿಯನ್ ಬೈಸನ್ ಫೆಸ್ಟ್' ಆಯೋಜಿಸಲಾಗಿದೆ?
ಉತ್ತರ: ಕಾಡುಕೋಣ
[ವಿವರಣೆ: ಇಂಡಿಯನ್ ಬೈಸನ್ ಎಂದರೆ ಕಾಡುಕೋಣ. ಅದರ ರಕ್ಷಣೆ ಮತ್ತು ಜನರಲ್ಲಿ ಅರಿವು ಮೂಡಿಸಲು ಈ ಉತ್ಸವವನ್ನು ನಡೆಸಲಾಗುತ್ತದೆ.]
8) ತಮಿಳುನಾಡಿನ ಅರಿಯೂರು ಶೋಲಾ ಮೀಸಲು ಅರಣ್ಯವನ್ನು 'ಡಾರ್ಕ್ ಸ್ಕೈ ಪಾರ್ಕ್' ಎಂದು ಘೋಷಿಸಲು ಮುಖ್ಯ ಕಾರಣವೇನು?
ಉತ್ತರ: ಕಡಿಮೆ ಬೆಳಕಿನ ಮಾಲಿನ್ಯ ಹಾಗೂ ನಕ್ಷತ್ರ ವೀಕ್ಷಣೆಗೆ ಪೂರಕ ಪರಿಸರ ಇರುವುದರಿಂದ.
[ವಿವರಣೆ: ಕೃತಕ ಬೆಳಕಿನ ಹಸ್ತಕ್ಷೇಪವಿಲ್ಲದೆ ರಾತ್ರಿ ಆಕಾಶವನ್ನು ಸ್ಪಷ್ಟವಾಗಿ ವೀಕ್ಷಿಸಲು ಸಾಧ್ಯವಿರುವ ಪ್ರದೇಶಗಳನ್ನು ಹೀಗೆ ಘೋಷಿಸಲಾಗುತ್ತದೆ.]
9) ಮಣಿಪುರ ಜನಾಂಗೀಯ ಹಿಂಸಾಚಾರದ ತನಿಖಾ ಆಯೋಗದ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಉತ್ತರ: ನ್ಯಾಯಮೂರ್ತಿ ಬಲ್ಬೀರ್ ಸಿಂಗ್ ಚೌಹಾಣ್
[ವಿವರಣೆ: ಹಿಂಸಾಚಾರದ ಘಟನೆಗಳ ನಿಷ್ಪಕ್ಷಪಾತ ತನಿಖೆಗಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಚೌಹಾಣ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಈ ಆಯೋಗದ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿ ಅಜಯ್ ಲಾಂಬಾ ಅವರು ವೈಯಕ್ತಿಕ ಕಾರಣಗಳಿಂದ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಹೊಸ ನೇಮಕಾತಿ ನಡೆದಿದೆ.]
10) ಭಾರತದ ಮೊದಲ ಕ್ವಾಂಟಮ್ ತಂತ್ರಜ್ಞಾನ ಮತ್ತು AI ಕೇಂದ್ರೀಕೃತ ವಿಶ್ವವಿದ್ಯಾಲಯ ಎಲ್ಲಿ ಸ್ಥಾಪನೆಯಾಗುತ್ತಿದೆ?
ಉತ್ತರ: ಅಮರಾವತಿ (ಆಂಧ್ರಪ್ರದೇಶದ ರಾಜಧಾನಿ)
[ವಿವರಣೆ: ಆಂಧ್ರಪ್ರದೇಶ ಸರ್ಕಾರವು ಅಮರಾವತಿಯಲ್ಲಿ ಈ ಹೈಟೆಕ್ ವಿಶ್ವವಿದ್ಯಾಲಯ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿದೆ.]
11) ಹಾರ್ಮುಜ್ ಜಲಸಂಧಿಯು ಯಾವ ಎರಡು ಪ್ರಮುಖ ಜಲರಾಶಿಗಳನ್ನು (water bodies) ಸಂಪರ್ಕಿಸುತ್ತದೆ?
ಉತ್ತರ: ಪರ್ಷಿಯನ್ ಕೊಲ್ಲಿ (Persian Gulf) ಮತ್ತು ಒಮನ್ ಕೊಲ್ಲಿ (Gulf of Oman)
12) ಹಾರ್ಮುಜ್ ಜಲಸಂಧಿಯನ್ನು ಅಂತರಾಷ್ಟ್ರೀಯ ರಾಜಕೀಯದಲ್ಲಿ ಏನೆಂದು ಕರೆಯುತ್ತಾರೆ?
ಉತ್ತರ: "ಜಗತ್ತಿನ ತೈಲದ ಜೀವನಾಡಿ" ಅಥವಾ "Chokepoint" (ಉಸಿರುಗಟ್ಟಿಸುವ ಬಿಂದು)

No comments:
Post a Comment